ಸ್ಯಾಂಡಲ್ವುಡ್ ನಲ್ಲಿ 45ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ದೇಶಕನ ಮಾಡಿರುವ ಓಂ ಪ್ರಕಾಶ್ ರಾವ್ ಒಬ್ಬ ಫೇಮಸ್ ನಿರ್ದೇಶಕರು. ಇವರು ಮಾಡಿರುವ ಸಾಕಷ್ಟು ಸಿನೆಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸುನ್ನು ಕಂಡಿದೆ. ಕನ್ನಡ ನಟಿಯರು ಮಾತ್ರವಲ್ಲದೆ ಇತರ ಭಾಷಾ ಕಲಾವಿದರನ್ನು ಕೂಡ ಕನ್ನಡಕ್ಕೆ ಪರಿಚಯ ಮಾಡಿಸಿದ ನಿರ್ದೇಶಕರಲ್ಲಿ ಓಂ ಪ್ರಕಾಶ್ ಕೂಡ ಒಬ್ಬರು. ಉದಾಹರಣೆ ದರ್ಶನ್ ಅಭಿನಯದ ನಿಖಿತ ಆಗಿರಬಹುದು, ಕಿಚ್ಚ ಸುದೀಪ್ ಅಭಿನಯದ ರೇಖಾ ಇರಬಹುದು. ಹೀಗೆ ಸಾಕಷ್ಟು ಕಲಾವಿದರನ್ನು ಕನ್ನಡಕ್ಕೆ ಪರಿಚಯ ಮಾಡಿಸಿದ್ದಾರೆ.
ಕಲಾವಿದರನ್ನ ಕೆಟ್ಟದಾಗಿ ಬಳಸಿಕೊಳ್ಳುತ್ತಾರೆ ಎನ್ನುವ ಆ-ರೋ-ಪ ಕೂಡ ಓಂ ಪ್ರಕಾಶ್ ಅವರ ಮೇಲೆ ಇದೆ ಈ ಎಲ್ಲದರ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ಅವರು ಓಪನ್ ಆಗಿ ಮಾತನಾಡಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ಅವರು ನಾನು ಯಾರಾದರೂ ಕಲಾವಿದೆಯರನ್ನ ಮಂಚಕ್ಕೆ ಕರೆದಿದ್ದೇನೆ ಅಂತ ಅವರಾಗಿ ಹೇಳಿದರೆ, ಯಾವ ಶಿಕ್ಷೆ ಬೇಕಾದರು ಅನುಭವಿಸೋಕ್ಕೆ ಸಿದ್ದ ಅಂತ ಹೇಳಿದ್ದಾರೆ. ಇನ್ನು ಇಂತಹ ಘಟನೆಗೆ ಸಂಬಂಧಪಟ್ಟ ಹಾಗೆ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್.
ಕಿಚ್ಚ ಸುದೀಪ್ ಅವರ ಪಾರ್ಥ ಚಿತ್ರವನ್ನು ನಿರ್ದೇಶನ ಮಾಡಿದವರು ಓಂ ಪ್ರಕಾಶ್, ಈ ಚಿತ್ರದಲ್ಲಿ ಸುದೀಪ್ ಹಾಗೂ ಮುಂಬೈನ ಬೆಡಗಿ ಹರಿದೀಪ್ ನಟಿಸಿದ್ರು. ಒಂದು ಕ್ಲೈಮ್ಯಾಕ್ಸ್ ಸೀನ್ ನ ಸಂದರ್ಭದಲ್ಲಿ ನಾಯಕಿ ನಟಿ ಸಹಾಯಕ ನಿರ್ದೇಶಕ ಹೇಳುತ್ತಿರುವ ಡೈಲಾಗ್ ಕೇಳಿದೆ ಪೋನಿನಲ್ಲಿ ಮಾತನಾಡುತ್ತಾ ಇದ್ದದ್ದನ್ನು ಓಂ ಪ್ರಕಾಶ್ ಗಮನಿಸಿದರು. ಈ ಸಿನೆಮಾದ ಆರಂಭದಿಂದಲೂ ಆಕೆಗೆ ಹೆಚ್ಚು ಸಿನೆಮಾದ ಕಡೆಗೆ ಗಮನ ಕೊಡಲು ಓಂ ಪ್ರಕಾಶ್ ಹೇಳಿದ್ದಾರಂತೆ.
ಆದರೆ ಆಕೆ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಕೊನೆಗೆ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಬಂದಾಗ ನೀನು ಹೀಗೆ ಫೋನ್ ನಲ್ಲಿ ಮಾತನಾಡುತ್ತಿದ್ದಾರೆ. ಆಕ್ಟಿಂಗ್ ಹೇಗೆ ಮಾಡ್ತಿಯಾ ಅಂತ ಹೇಳುತ್ತಾರೆ ಮ್ ಅದಕ್ಕೆ ನಾನು ಡೈಲಾಗ್ ಹೇಳೋಕ್ಕೆ ಸಿದ್ದ ಅಂತ ನಾಯಕಿ ನಟಿ ಹೇಳಿದ್ದಾಳೆ. ಶೂಟಿಂಗ್ ಆರಂಭಿಸಿದರೆ ಆಕೆ ಸಿಕ್ಕಾಪಟ್ಟೆ ಟೇಕ್ ತೆಗೆದುಕೊಳ್ಳುತ್ತಾಳೆ. ಇದನ್ನು ಓಂ ಪ್ರಕಾಶ್ ಸಿಕ್ಕಾಪಟ್ಟೆ ಬೈಯುತ್ತಾರೆ. ಆಗ ಅಲ್ಲಿದ್ದ ಒಬ್ಬ ಕಲಾವಿದ ಓಂ ಪ್ರಕಾಶ್ ಬಹುಷಃ ರಾತ್ರಿ ಮಂಚಕ್ಕೆ ಕರಿದಿರಬೇಕು ಆಕೆ ಇಲ್ಲ ಎಂದು ಹೇಳಿರಬೇಕು.
ಅದಕ್ಕೆ ಬೈಯುತ್ತಿದ್ದಾರೆ ಎಂದು ಸುದ್ಧಿ ಹಬ್ಬಿಸುತ್ತಾನೆ. ನಾನು ಹೀಗೆ ಮಂಚಕ್ಕೆ ಕರೆಯೋ ಹಾಗಿದ್ರೆ ಕ್ಲೈಮ್ಯಾಕ್ಸ್ ಸೀನ್ ವರೆಗೂ ಕಾಯಬೇಕಿರಲಿಲ್ಲ ಆ ಕೆಲಸ ಯಾವಾಗಲೂ ಮಾಡಬಹುದು ಅಂತ ಕಲಾವಿದನಿಗೂ ಹಾಗೂ ತನ್ನ ಬಗ್ಗೆ ಮಾತನಾಡಿದವರಿಗೂ ಚನ್ನಾಗಿ ಗ್ರಹಚಾರ ಬಿಡಿಸಿದ್ದರು ಓಂ ಪ್ರಕಾಶ್. ಇದೆ ತರಹ ಇನ್ನೊಂದು ಘಟನೆಯ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಹುಚ್ಚ ಸಿನೆಮಾದಲ್ಲಿ ರೇಖಾ ಅಭಿನಯಿಸಿದ್ರೂ ರೇಖಾ ಅವರನ್ನು ಮೊದಲು ಕನ್ನಡಕ್ಕೆ ಪರಿಚಯಿಸಿದ ಓಂ ಪ್ರಕಾಶ್. ಹೀಗಿರುವಾಗ ಶೋಟಿಂಗ್ ಸೆಟ್ ನಲ್ಲಿ ಇಂಗ್ಲಿಷ್ ನಲ್ಲಿ ಸುದೀಪ್ ಜೊತೆಗೆ ಮಾತನಾಡುತ್ತಿದ್ದ ರೇಖಾ ಅವರಿಗೆ ನಟನೆಯ ಬಗ್ಗೆ ಹೆಚ್ಚು ಗಮನ ಇರಲಿಲ್ಲ. ಈಗ ಚಿತ್ರಕಾರಣದ ಸಮಯದಲ್ಲಿಯೇ ರೇಖಾ ಅವರಿಗೆ ಹೊಡೆದು ಸರಿಯಾಗಿ ನಟಿಸುವಂತೆ ಓಂ ಪ್ರಕಾಶ್ ರೇಖಾ ಅವರಿಗೆ ಹೇಳಿದ್ದರು.
ಇದು ಬಹಳ ದೊಡ್ಡ ಸುದ್ಧಿಯು ಆಗಿತ್ತು. ಆದರೆ ಕೆಲವು ಸಮಯಗಳ ನಂತರ ನಟಿ ರೇಖಾ ಅವರೇ ಸ್ವತಃ ಓಂ ಪ್ರಕಾಶ್ ಅವರ ಬಳಿ ಬಂದು ನಾನು ನಟಿಸಿದ್ದು ಸರಿಯಾಗಿ ಇರಲಿಲ್ಲ ನನ್ನಿಂದಲೇ ತಪ್ಪಾಗಿದೆ ಅಂತ ಕೇಳಿಕೊಂಡಿದ್ರಂತೆ. ಆದರೆ ಓಂ ಪ್ರಕಾಶ್ ಅವರ ಸಿಟ್ಟು, ಕೋಪ ಅವರ ಬಗ್ಗೆ ಬೇರೆಯದೆ ರೀತಿಯಲ್ಲಿ ಸುದ್ಧಿ ಮಾಡಿತ್ತು. ನನ್ನ ಬಗ್ಗೆ ಹೀಗೆ ಯಾಕೆ ಮಾತಾಡ್ತಾರೆ ಅನ್ನೋದು ನನಗೆ ಈಗಲೂ ಅರ್ಥವಾಗುದಿಲ್ಲ ಅಂತ ನಿರ್ದೇಶಕ ಓಂ ಪ್ರಕಾಶ್ ರಾವ್ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮಾಹಿತಿಯ ಬೆಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.